ಏರಿಸು ಹಾರಿಸು
ಕನ್ನಡದ ಬಾವುಟ
ಓಹೋ ಕನ್ನಡ ನಾಡು
ಆಹಾ ಕನ್ನಡ ನುಡಿ
ಹಾರಿಸು ತೋರಿಸು
ಕೆಚ್ಚೆದೆಯ ಬಾವುಟ
– ಬಿ.ಎಂ.ಶ್ರೀ
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸೆದು
ಹಚ್ಚೇವು ಕನ್ನಡದ ದೀಪ
-ಡಿ.ಎಸ್.ಕರ್ಕಿ
ನೀ ಮೆಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
-ಕುವೆಂಪು
ಹಸುರಿನ ಗಿರಿಗಳ ಮಲೆಗಳ ನಾಡೆ
ನದ ನದಿ ತೊರೆಗಳ ಪುಣ್ಯದ ಬೀಡೆ
ಖಗಮಿಗ ಮೃಗ ಕೋಗಿಲೆಗಳ ನಾಡೆ
ಗಂಧ ಸುಗಂಧದ ಪಾವನ ಬೀಡೆ
-ಎಚ್.ಆರ್.ಲೀಲಾವತಿ
ಕನ್ನಡ ಜನ ಕನ್ನಡತನ
ಕನ್ನಡ ತನುಮನ
ಕನ್ನಡ ಮಾತು ಸುಂದರ
ಕನ್ನಡ ಮನಸು ಸುಂದರ
-ಸಂಧ್ಯಾ ರವೀಂದ್ರನಾಥ್
Recent Comments